ಸೂಜಿ-ಗಲ್ಲು

ಬೆಂಗಳೂರಲ್ಲಿ ಬಸ್ಸು ಹತ್ತಿದರೆ
ಊರು ಸೇರುವುದೇ ಒಂದು ಬದುಕು.

ಬರ್ರೆಂದು ಬೀಸುತ್ತ ಬರುವ ಸೊಕ್ಕಿದ ಲಾರಿಗಳು
ಪಕ್ಕೆಲುಬು ಮುರಿದು ಬಿಕ್ಕುತ್ತ ಕೂರುತ್ತವೆ.
ನೆಲದ ಮೇಲಿನ ಹಕ್ಕಿಯಾಗುವ ಕಾರುಗಳು
ಹಾಡು ಹರಿದು ಚಿಂದಿಯಾಗಿ ಚೀರುತ್ತವೆ.

ಸಾಯಬೇಕೆನ್ನುವ ಸೇಡಿನಲ್ಲಿ
ಕಣ್ಣುಮುಚ್ಚಾಲೆಯಾಡುವ ರೊಚ್ಚಿನಲ್ಲಿ
ನೆತ್ತರು ಬರೆದ ಬರಹ ಓದಲಾರದೆ
ಕಣ್ಣು ಮುಚ್ಚುತ್ತೇನೆ.

ಇದ್ದಕ್ಕಿದ್ದಂತೆ ಬ್ರೇಕು ಬುಸುಗುಟ್ಟಿದಾಗ
ಥಟ್ಟನೆ ಕಣ್ತೆರೆದು ಪಕ್ಕಕ್ಕೆ ನೋಡುತ್ತೇನೆ-
ಅಲ್ಲಿ ಜೊತೆಗೆ ಬರಲಾಗದೆ ಹಿಂದಕ್ಕೆ ಓಡುವ ಹೊಲಗಳು
ಹೊಲಗಳಲ್ಲಿ ಹಿಂದೆ ಮುಂದೆ ನೋಡದೆ ಎದ್ದ ಹುತ್ತಗಳು!

ಹೊಲದಲ್ಲಿ ಬೆಳೆದ ಈ ಹುತ್ತಗಳಲ್ಲಿ
ಹೂವು ಅರಳಬಾರದೆ ಎಂದುಕೊಳ್ಳುತ್ತೇನೆ
ಆದರೆ ಹಾವು ಬುಸ್ಸೆನ್ನುತ್ತದೆ.

ನಿತ್ಯ ಅದೇ ಗೋಳು ಅದೇ ಬಾಳು
ಫ್ಯೂಡಲ್ ಲಾರಿಗಳು ಕ್ಯಾಪಿಟಲ್ ಕಾರುಗಳು
ಹಿಗ್ಗಾಮುಗ್ಗ ನುಗ್ಗುವ ಕನಸುಗಳು
ನುಚ್ಚುನೂರಾದ ಬಿಡಿಭಾಗಗಳು
ಛಂದಸ್ಸಿನಲ್ಲಿ ಛಿದ್ರವಾದ ಮಾತ್ರೆ ಗಣಗಳು
ಗೊಣಗುತ್ತವೆ; ಒಣಗುತ್ತವೆ ನೂರಾರು ಬಣ್ಣಗಳು.
ಆಗ ನೀರಿಗೆ ಬಿದ್ದ ಸುಣ್ಣವಾಗುತ್ತೇನೆ-
ಹೇಳಿ ಬಂಧುಗಳೇ
ಮತ್ತೆ ಬರಬೇಕೆ ಇಲ್ಲಿಗೆ?
ತಿನ್ನುವ ತುತ್ತು ಅನ್ನಕ್ಕೂ ಕನ್ನ ಹಾಕುವ
ಬಾಳಿನ ಬಗ್ಗೆ ಕನಸುತ್ತ;
ಸಾವಿನ ಲೆಕ್ಕ ಬರೆಯುವ ಬುಕ್ಕಿನಲ್ಲಿ
ಬೆಳ್ಳಿ ಚುಕ್ಕಿಗಳನ್ನು ಬಿಡಿಸುತ್ತ;
ಸೃಷ್ಟಿಬೀಜದ ಬಸುರಿ ಹೊಲಗಳಲ್ಲಿ
ಲಯದ ಭಯ ಬುಸುಗುಡುವ ಹುತ್ತ ಕಾಣುತ್ತ-

ಹೇಳಿ ಬಂಧುಗಳೇ ಹೇಳಿ
ಮತ್ತೆ ಬರಬೇಕೆ ಇಲ್ಲಿಗೆ?
ಬಿಟ್ಟರೂ ಬಿಡದ ಈ ನನ್ನ ಸೂಜಿ-ಗಲ್ಲಿಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗೆ ತಾನೇ ಸಹಿಸಲಿ?
Next post ಭಗ್ನ ಪ್ರೇಮಿಗಳು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys